ಶತಮಾನಗಳ ಇತಿಹಾಸ ಹೊಂದಿರುವ ವಿಶ್ವ ಪ್ರಸಿದ್ಧ ಬೆಂಗಳೂರು ಕರಗಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಆದಿಶಕ್ತಿಯನ್ನು ಗುರುತಿಸಿ ಆರಾಧಿಸುವ ಹಲವಾರು ಸಂಪ್ರದಾಯಗಳಲ್ಲಿ ಕರಗ ಮಹೋತ್ಸವವೂ ಒಂದು. ಕರಗ(ಕರಕ) ಎಂಬ ಮಾತಿಗೆ 'ಕುಂಭ' ಎಂಬ ಅರ್ಥ ಇದೆ. ಶತಮಾನಗಳ ಇತಿಹಾಸ ಹೊಂದಿರುವ ಬೆಂಗಳೂರು ಕರಗಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಕರಗದ ಒಂದೊಂದು ಅಕ್ಷರವೂ ಒಂದೊಂದು ಸಂಕೇತವನ್ನು ಹೊಂದಿವೆ ಎನ್ನುವ ಪ್ರತೀತಿ ಇದೆ. ಕ-ಕೈಯಿಂದ ಮುಟ್ಟದೆ, ರ-ರುಂಡದ ಮೇಲೆ ಧರಿಸಿ, ಗ-ಗತಿಸುವುದು (ತಿರುಗುವುದು) ಎಂಬ ಅರ್ಥ ವಿವರಣೆ ಬಳಕೆಯಲ್ಲಿದೆ. ಕರಗ ಪೂಜೆ ಮತ್ತು ಉತ್ಸವಗಳು ತಮಿಳುನಾಡಿನಲ್ಲಿ ಬಹು ಹಿಂದಿನಿಂದಲೂ ವೈಭವದಿಂದ ಆಚರಿಸಲ್ಪಡುತ್ತಿದೆ. ಕರ್ನಾಟಕ ರಾಜ್ಯದ ಬೆಂಗಳೂರು, ಕೋಲಾರ ಜಿಲ್ಲೆಯ ಕೆಲವು ಭಾಗಗಳಲ್ಲಿ ಈ ಆಚರಣೆ ರೂಢಿಯಲ್ಲಿದೆ. ಬೆಂಗಳೂರಿನ ಕರಗ ಪ್ರಸಿದ್ಧಿಯಾಗಿದೆ.
ಆಚರಣೆ ಹಿನ್ನಲೆ:
            ವಹ್ನಿಕುಲ ಕ್ಷತ್ರಿಯ ( ತಿಗಳ) ಜನಗಂಗಾದವರು ಮಹಾಭಾರತ ಕಥಾನಾಯಕಿಯಾದ ದ್ರೌಪದಿಯನ್ನು ಅಗ್ನಿಯಿಂದ ಉದಯಿಸಿ ಬಂದ ಆದಿಶಕ್ತಿಯೆಂದು ತಾವುಗಳು ಆಕೆಯ ಮಾನಸ ಪುತ್ರರೆಂದು ದೃಢವಾಗಿ ನಂಬಿ ಶ್ರದ್ಧಾಭಕ್ತಿಯಿಂದ ಆಕೆಯನ್ನು ಆರಾಧಿಸುತ್ತಾರೆ . ಮಹಾಭಾರತದ ಸ್ವರ್ಗಾರೋಹಣ ಪರ್ವದಲ್ಲಿ ಪಾಂಡವರು ರಾಜ್ಯ ಆಡಳಿತವನ್ನು ಮುಗಿಸಿ ಧಾರ್ಮಿಕ ವಿಧಿವಿಧಾನಗಳನ್ನು, ಯಜ್ಞ ಯಾಗಾಧಿಗಳನ್ನು, ಪೂರೈಸಿ ಶ್ವೇತವಸ್ತ್ರಧಾರಿಗಳಾಗಿ ದ್ರೌಪದಿ ಸಮೇತ ಸ್ವರ್ಗದ ದಾರಿಹಿಡಿದು ನಿಷ್ಚಿಂತೆಯಿಂದ ಸಾಗುತಿದ್ದ ಪಾಂಡವರು ಮುಂದೆ ಮುಂದೆ ಸಾಗುತ್ತಿರಬೇಕಾದರೆ ದ್ರೌಪದಿಯು ತನ್ನ ಭೂಲೋಕದ ಅನುಭವಗಳನ್ನು ಚಿಂತಿಸುತ್ತಾ ಧಾರೆಯಲ್ಲಿ ರಕ್ಕಸರ ಪಡೆಯೇ ನಿರ್ಮಾಣವಾಗಿದ್ದರೂ ವನವಾಸ ಕಾಲದಲ್ಲಿ ಕಾಣಿಸಿಕೊಂಡಿದ್ದ ತಿಮಿರಾಸುರನ ಸಂಹಾರದ ಬಗ್ಗೆ ಚಿಂತಿಸುತ್ತಾ ನಡುಗೆಯ ದಾರಿಯಲ್ಲಿ ಹಿಂದಿರುತ್ತಾಳೆ. ಈ ಸಮಯನ್ನು ಕಾಯುತ್ತಿದ್ದ ತಿಮಿರಾಸುರನು ದ್ರೌಪತಿಯನ್ನು ಅಡ್ಡಗಟ್ಟಿ ಈ ಧಾರೆಯಲ್ಲೇ ಸುರದ್ರೂಪಿಯಾದ ನೀನು ಪಾಂಡವರನ್ನು ಕಟ್ಟಿಕೊಂಡು ಪಟ್ಟ ಕಷ್ಟಕಾರ್ಪಣ್ಯಗಳನ್ನು ಅರಿತ್ತಿದ್ದೇನೆ ಇನ್ನು ಮುಂದೆಯಾದರೂ ನನ್ನೊಡನೆ ಇಹಲೋಕದಲ್ಲಿ ಸುಖವನ್ನು ಅನುಭವಿಸು. ತದನಂತರ ನೀನು ಇಷ್ಟಪಟ್ಟಲ್ಲಿ ನೇರವಾಗಿ ಸ್ವರ್ಗಕ್ಕೆ ವಿಮಾನದಲ್ಲಿ ನಾನೆಕೆರೆದೊಯ್ಯುತ್ತೇನೆ ಎಂದಲ್ಲ ಪ್ರಲಾಪಿಸುತ್ತಾನೆ. ದ್ರೌಪದಿಯು ಅವನಿಗೆ ಹೇಳಿದ ಬುದ್ಧಿವಾದಗಳು ಸನ್ಮಾರ್ಗದಲ್ಲಿ ನಡೆಯಲು ನೀಡಿದ ಸಲಹೆಗಳು ತಿಮಿರಾಸುರನಿಗೆ ಅಪತ್ಯಗಳಾದವು ಕೊನೆಗೆ ಅವನ ಕೀಟಲೆಗಳಿಂದ ಬೇಸತ್ತ ದ್ರೌಪದಿಯು ಶ್ರೀ ಕೃಷ್ಣಾಸ್ಮರಣೆ ಮಾಡಲಾಗಿ ಶ್ರೀ ಕೃಷ್ಣಾ ದ್ರೌಪದಿಯನ್ನು ಸಂತೈಯಿಸಿ ನಾನು ನಿನ್ನಿಂದ ಬಹುದೂರವಿದ್ದೇನೆ ಪಾಂಡವರು ಮುಂದೆ ಸಾಗಿರುವರು ಹಿಂದುರುಗಿ ಬರಲಾರರು ನಿನ್ನ ಹಿಂದಿನ ಸಾಮರ್ಥ್ಯಗಳನ್ನು ಜ್ಞಾಪಿಸಿಕೋ. ತಿಮಿರಾಸುರನ ಸಂಹಾರ ಮಾಡುವ ಶಕ್ತಿ ನಿನ್ನಲ್ಲಿಯೇ ಇದೆ ಎಂದು ಎಚ್ಚರಿಸುತ್ತಾನೆ. ಆಗ ದ್ರೌಪದಿ ವಿಶ್ವರೂಪವನ್ನು ತಳೆದು ತಲೆಯಿಂದ ಯಜಮಾನನೂ, ಹಣೆಯಿಂದ ಗಣಾಚಾರಿಯನ್ನು, ಬಾಯಿಂದ ಗಂಟೆಪೂಜಾರಿಯನ್ನು, ಕಿವಿಯಿಂದ ಗೌಡರನ್ನು, ತೋಳುಗಳಿಂದ ವೀರಕುಮಾರರನ್ನು ಸೃಷ್ಟಿಸಿ ವ್ಯೂಹವನ್ನು ರಚಿಸಿ ತಿಮಿರಾಸುರನ ಮೇಲೆ ಯುದ್ಧವನ್ನು ಹೂಡಿ ತಿಮಿರಾಸುರನನ್ನು ಮತ್ತು ಬೆಂಬಲಿಸಿ ಬಂದ ರಕ್ಕಸ ಪಡೆಯನ್ನು ಸಂಹಾರ ಮಾಡಿ ತನ್ನ ಇಹ ಲೋಕದ ಕರ್ತವ್ಯವನ್ನು ಮುಗಿಸಿ ಸ್ವರ್ಗದ ಹಾದಿಯನ್ನು ಹಿಡಿದು ಹೊರಡುತ್ತಾಳೆ.
                       
ಗಣಾಚಾರಿ, ಗಂಟೆಪೂಜಾರಿಯಾದ ವೀರಕುಮಾರರು ತಮ್ಮ ಮುಂದಿನ ದಾರಿಯೆನೆಂದು ದಿಕ್ಕುಕಾಣದೆ ಗೋವಿಂದನ ನಾಮಸ್ಮರಣೆ ಮಾಡುತ್ತಾರೆ. ಶ್ರೀ ಕೃಷ್ಣನು ಇವರಿಗೆ ಕಾಣಿಸಿಕೊಂಡು ನಿಮ್ಮ ಬದುಕು ನಿಮ್ಮ ತಾಯಿಯೇ ದಾರಿಕಾಣಿಸಬೇಕು. ಆಕೆಯನ್ನು ಧ್ಯಾನಿಸಿ ಎಂದು ಸಲಹೆ ನೀಡಿ ಅಂತರ್ಧಾನನಾಗುತ್ತಾನೆ. ಈ ಸ್ಥಿತಿಯಲ್ಲಿ ದಿಕ್ಕು ತೋರದೆ ಗಣಾಚಾರಿ, ಗಂಟೆಪೂಜಾರಿಗಳು ದೇವಿಯನ್ನು ಧ್ಯಾನಿಸತೊಡಗುತ್ತಾರೆ. ವೀರಕುಮಾರರು ತಮ್ಮ ಖಡ್ಗಗಳನ್ನು ತಮ್ಮ ಎದೆಯ ಮೇಲೆ ಬಲವಾಗಿ ಆಯಿಸುತ್ತ ಆತ್ಮಾಹುತಿಗೆ ಮುಂದಾಗುತ್ತಾರೆ. ಈ ಆಕ್ರಂದನಕ್ಕೆ ಮನಕರಗಿದ ದೇವಿ ತನ್ನ ಮಾನಸ ಪುತ್ರರನ್ನು ಸಂತೈಸುತ್ತಾ, ನಾನು ಈ ಧರೆಗೆ ಬಂಡ ಕಾರ್ಯವು ಮುಗಿದಿರುತ್ತದೆ. ನಾನು ನಿಮ್ಮೊಂದಿಗೆ ಉಳಿಯಲು ಸಾಧ್ಯವಿಲ್ಲಾ ನೀವುಗಳು ಧರ್ಮಯಿಂದ ಕ್ಷತ್ರಿಯರಾಗಿ ಈ ಧಾರೆಯಲ್ಲಿ ಆಳ್ವಿಕೆ ನಡೆಸಿರಿ ಧರ್ಮವನ್ನು ಕಾಪಾಡುವುದು ಸ್ತ್ರೀ ರಕ್ಷಣೆ, ಗೋರಕ್ಷಣೆ ನಿಮ್ಮ ಅದ್ಯಾಕರ್ತ್ಯವಾಗಲಿ ವರ್ಷಕ್ಕೊಮ್ಮೆ ಧರೆಗೆ ಬಂದು ಮೂರು ದಿನಗಳ ಕಾಲ ನಿಮ್ಮೊಂದಿಗೆ ಇರುತ್ತೇನೆ ಎಂದು ವಚನವಿತ್ತು ಅಂತದ್ರಾನಳಾಗುತ್ತಾಳೆ. ಅಂತೆಯೇ ವಹ್ನಿಕುಲ ಕ್ಷತ್ರಿಯ ಜನಾಂಗವು ಆದಿಶಕ್ತಿ ದ್ರೌಪದಿ ದೇವಿಯ ಮಾನಸ ಪುತ್ರರೆಂದು ವರ್ಷಕ್ಕೊಮ್ಮೆ ಅದೇವಿಯು ಧರೆಗೆ ಬರುತ್ತಾಳೆಂದು, ಮೂರು ದಿನಗಳ ಕಾಲ ಆ ದೇವಿಯ ಸೇವೆ ಮಾಡುವ ಭಾಗ್ಯ ನಮ್ಮದಾಗಿರುತ್ತದೆ ಎಂತಲೂ ದೃಢವಾಗಿ ನಂಬಿ ಚೈತ್ರ ಮಾಸದ ತ್ರಯೋದಶಿಯ ದಿನ ನೀರಿನ ದಡದಲ್ಲಿ ಆಕೆಯನ್ನು ಆರಾಧಿಸಿ ಆಹ್ವಾನಿಸಿ ಹಾಸಿಕರಾಗದ ರೂಪದಲ್ಲಿ ಗುಡಿತುಂಬಿಸಿಕೊಳ್ಳುವುದು ಚತುರ್ದಶಿಯ ದಿನ ಪುರಾಣ ಕಥನಗಳನ್ನು ನಡೆಸಿ ಫೋನ್ಗಳು ನೈವಿದ್ಯವನ್ನು ಸಮರ್ಪಿಸಿ ಅದಧಿಸುತ್ತ. ಚೈತ್ರ ಪೌರ್ಣಮಿಯದಿನ ಕಾರಗಶಕ್ತಿಯನ್ನು ಆರಾಧಿಸಿ ಸಿಂಗರಿಸಿ ಪೂಜಾರಿಯು ಕಾರಗಶಕ್ತಿಯನ್ನು ಶ್ರದ್ಧಾಭಕ್ತಿಯಿಂದ ಶಿರದಲ್ಲಿ ಧರಿಸಿ ಭಕ್ತರಿಗೆ ದರ್ಶನ ನೀಡುವ ಆಚರಣೆಯೇ ಕಾರಾಗಾಶಕ್ತ್ಯೋತ್ಸವದ ಹಿನ್ನಲೆ ಆಗಿರುತ್ತದೆ.
ಕರಗ ಹಬ್ಬದ ಆಚರಣೆ:
                   
ಕರಗ ಹಬ್ಬದ ಆಚರಣೆ ಹಿಂದೂ ತೂಗುತೇದಿಯ(ಕ್ಯಾಲೆಂಡರ್) ಮೊದಲ ತಿಂಗಳ ಸಪ್ತಮಿ ಇಂದ ಶುರುವಾಗಿ ಹನ್ನೊಂದು ದಿನಗಳ ಕಾಲ ನಡೆಯುತ್ತದೆ. ಆ 11 ದಿನಗಳ ಗಡುವಿನಲ್ಲಿ, 3 ದಿನಗಳ ಕಾಲ ತಾಯಿ ದ್ರೌಪದಿ ತಮ್ಮೊಡನೆ ಇರುತ್ತಾಳೆಂದು ತಿಗಳರ ನಂಬಿಕೆ. ಬೆಂಗಳೂರಿನ ತಿಗಳರ ಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ಗುಡಿಯಲ್ಲಿ ಹಬ್ಬದ ಚಟುವಟಿಕೆಗಳು ನಡೆಯುತ್ತವೆ. ಹನ್ನೊಂದು ದಿನಗಳ ಸಡಗರದಲ್ಲಿ ಕಾರ್ಯಕ್ರಮಗಳು ಹೀಗಿರುತ್ತವೆ: